ಶ್ರೀದೇವಿ ವಿದ್ಯಾಕೇಂದ್ರದಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ೭೮ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆ.15ರಂದು ಆಚರಿಸಲಾಯಿತು.
ನಿವೃತ್ತ ಸೈನಿಕ, ಶಾಲಾ ಆಡಳಿತ ಸಮಿತಿ ಸದಸ್ಯರಾದ ಶ್ರೀ ಈಶ್ವರ ನಾಯ್ಕ ಬೇರಿಕೆ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.
ಸ್ವಾತಂತ್ರೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ ಜಯಶ್ಯಾಂ ನೀರ್ಕಜೆ, ಸಂಚಾಲಕರಾದ ಶ್ರೀ ರವೀಶ್ ಪೊಸವಳಿಕೆ, ಕೋಶಾಧಿಕಾರಿಯಾದ
ಶ್ರೀ ಶ್ರೀರಾಮಚಂದ್ರಭಟ್ ಕೆ ಸದಸ್ಯರಾದ ಶ್ರೀ ಅರವಿಂದ ವಳಕಟ್ಟೆ, ಶ್ರೀಮತಿ ಗಂಗಮ್ಮ ಪಿ, ಶ್ರೀ ಪ್ರವೀಣ್ ಬೊಳರಡ್ಕ , ಹಿರಿಯ ಶಿಕ್ಷಕರು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಘೋಷ್’ವಾದನ,ಜೈಕಾರದ ಮೂಲಕ ಮೆರವಣಿಗೆ ಪರಿಯಾಲ್ತಡ್ಕಕ್ಕೆ ಸಾಗಿ ಬಂದು ಸಮಾಪನಗೊಂಡಿತು. ಅಲ್ಲಲ್ಲಿ ಸಿಹಿತಿಂಡಿ, ಪಾನೀಯದ ವಿತರಣೆ ನಡೆಯಿತು.